ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳಲ್ಲಿ ತೇಲಿ ಬರುವ ಅಡಕೆ, ತೆಂಗಿನಕಾಯಿ ಹಿಡಿಯುವುದಕ್ಕೆ ದಕ್ಷಿಣ ಕನ್ನಡದ ಗ್ರಾಮಸ್ಥರು ಕಂಡುಕೊಂಡ ವಿಧಾನವಿದು. ಜಿಲ್ಲೆಯ ಹಳ್ಳಿಗಳಿಗೆ ತೆರಳಿದರೆ ಹೀಗೆ ಬಿದಿರಿಗೆ ಬುಟ್ಟಿಕಟ್ಟಿ ತೆಂಗು ಅಡಕೆ ಹಿಡಿಯುತ್ತಿರುತ್ತಾರೆ. ಮಳೆಗಾಲದಲ್ಲಿ ಕೆಲಸ ಕಡಮೆ ಇರುವಾಗ ಹೊಟ್ಟೆಪಾಡಿಗೆ ಒಂದು ಮೂಲವೂ ಆಗುತ್ತದೆ. ಇತ್ತೀಚೆಗೆ ಸುಬ್ರಹ್ಮಣ್ಯ ಕಡೆಗೆ ಹೋಗಿದ್ದಾಗ ಸಿಕ್ಕ ಚಿತ್ರವಿದು