skip to main |
skip to sidebar
ಕುದುರೆಮುಖಕ್ಕೆ ಹೋಗುವಾಗ ಸಿಗುವ ದಾರಿಯಿದು. ಬೋಳುಗುಡ್ಡಗಳು, ಇಕ್ಕೆಲಗಳಲ್ಲಿ ಶೋಲಾಕಾಡು, ನಡುವೆ ಸಾಗುವ ದಾರಿ...ಬಿಸಿಲು ನೆರಳಿನ ಆಟ ಕಂಡುಬಂದಿದ್ದು ಹೀಗೆ...
ಇದು ನನಗಂತೂ ಬಹಳ ಅಪರೂಪದ ದೃಶ್ಯ! ಸಾಮಾನ್ಯವಾಗಿ ಭತ್ತ ಬಿಡಿಸುವ ಹಳೆಯ ತಂತ್ರವಿದು. ದನಗಳನ್ನು ಸಾಲಾಗಿ ಕಟ್ಟಿ ಭತ್ತದ ಒಣ ತೆನೆಗಳ ಮೇಲೆ ಹಾಯಿಸುವುದು. ಆಗ ಭತ್ತ ಕೆಳಗೆ ಬೀಳುವುದು, ಅದನ್ನೇ ನಂತರ ಸಂಗ್ರಹಿಸುವುದು...ಮೊನ್ನೆ ಚಾರಣ ಹೋಗಿದ್ದಾಗ ಕುದುರೆಮುಖ ಸಮೀಪದ ಸಂಸೆ ಬಳಿ ಕಂಡು ಬಂದ ಸನ್ನಿವೇಶವಿದು....